ರಾಯಚೂರು: ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ನೀಲಕಂಠೇಶ್ವರ ಕಿರಾಣಿ ಸ್ಟೋರ್ನಲ್ಲಿ ದಾಳಿ ಮಾಡಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ₹1.30 ಲಕ್ಷ ಮೌಲ್ಯದ ಪಟಾಕಿಯನ್ನು ಪೊಲೀಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ. ಅವರು ಸಿಬ್ಬಂದಿ ಜಪ್ತಿ ಮಾಡಿ ವ್ಯಾಪಾರಿ ಚಂದ್ರಶೇಖರ ಶರಣಪ್ಪ ದೇವಾಪುರ ವಶಕ್ಕೆ ತೆಗೆದುಕೊಂಡಿದ್ದಾರೆ.
ಕಲಂ 286, 336 ಐ.ಪಿ.ಸಿ, ಮತ್ತು 9(ಬಿ) ಸ್ಫೋಟಕ ಕಾಯ್ದೆ 1884 ರ ಪ್ರಕಾರ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.