ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ಕೃಷಿ, ಆರೋಗ್ಯ, ಕೌಶಲ್ಯ ವೃದ್ದಿ ಸೇರಿದಂತೆ ವಿವಿಧ ಸೂಚ್ಯಂಕಗಳಲ್ಲಿ ಜಿಲ್ಲೆಯ ಪ್ರಗತಿಯಲ್ಲಿ ಏರಿಕೆ ಕಾಣಬೇಕು. ಒಟ್ಟಾರೆಯಾಗಿ ಈ ಸೂಚ್ಯಂಕಗಳ ಪ್ರಗತಿಯನ್ನು ಪರಿಶೀಲಿಸಿದಲ್ಲೀ, ಕೆಲವು ಮಾನದಂಡಗಳಲ್ಲಿ ಪ್ರಗತಿ ಉತ್ತಮವಾಗಿದೆ, ಆದರೆ ಸಾಧಿಸುವುದು ಮತ್ತಷ್ಟು ಇದೆ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಇದಕ್ಕಾಗಿ ಮತ್ತಷ್ಟು ಕಾರ್ಯಪ್ರವೃತ್ತರಾಗಬೇಕು ಎಂದರು.