‘ವಿವಿಧ ಕಾಲುವೆಗಳಲ್ಲಿ ಹೂಳು ತುಂಬಿದ್ದು ಸರಾಗವಾಗಿ ನೀರು ಹರಿಯುತ್ತಿಲ್ಲ. ಬೆಟ್ಟದಲ್ಲಿ ಟ್ರಚ್ ಅಗೆವುದಕ್ಕಿಂತ ರೈತರ ಜಮೀನುಗಳಲ್ಲಿ ಬಸಿ ಕಾಲುವೆ, ಬಂಡಿ ಮಾರ್ಗ, ಸಣ್ಣ ಕಾಲುವೆಗಳು ಹೂಳು ಸ್ವಚ್ಚತೆ ಮಾಡುವಂತಹ ಕಾಮಗಾರಿಗಳನ್ನು ಗ್ರಾ.ಪಂ ಅಡಳಿತ ಮಂಡಳಿ ಕೈಗೊಳ್ಳಬೇಕು. ಕಳೆದ ಎರಡು ವರ್ಷಗಳಿಂದ ಕಾಲುವೆಗಳ ಹೂಳು ಸ್ವಚ್ಛತೆಗೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಮಾಡದೇ ಇರುವುದರಿಂದ ರೈತರಿಗೆ ಸಮಸ್ಯೆ ಆಗಿದೆ’ ಎಂದು ರೈತರಾದ ರವಿ ನಾಯಕ, ಶಿವಕುಮಾರ, ರಮೇಶ ದೂರಿದರು.