ಮಾನ್ವಿ: ’ವಾಲ್ಮೀಕಿ ಭವನದ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಗೈರಾಗಿರುವುದು ಖಂಡನೀಯ' ಎಂದು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಅಧ್ಯಕ್ಷ ಮೌನೇಶ ನಾಯಕ ಮ್ಯಾಕಲ್ ಹೇಳಿದರು.
ಮಂಗಳವಾರ ಪಟ್ಟಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ' ಮಾರ್ಚ್ 16ರಂದು ಮಾನ್ವಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೋಳ ಖರೀದಿ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಯ ಹೆಚ್ಚುವರಿ ವಾರ್ಡ್ಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಸಚಿವ ಬೋಸರಾಜು ಭಾಗವಹಿಸಿದ್ದರು. ಆದರೆ,ಅದೇ ದಿನ ನಡೆದ ವಾಲ್ಮೀಕಿ ಭವನದ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಹಾಜರಾಗದೇ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ' ಎಂದು ದೂರಿದರು.
ಮುಖಂಡರಾದ ಬಸನಗೌಡ ಉಟಕನೂರು, ಚಿದಾನಂದ ಸ್ವಾಮಿ ನಾಯಕ, ವಿಜಯ ನಾಯಕ, ಶಿವಾರ್ಜುನ ನಾಯಕ, ದೇವರಾಜ ನಾಯಕ, ಅಯ್ಯಪ್ಪ ನಾಯಕ, ನಾಗರಾಜ ನಾಯಕ, ಬಸವರಾಜ ನಾಯಕ ಉಪಸ್ಥಿತರಿದ್ದರು.