ಬಿತ್ತನೆಗಾಗಿ ಖರ್ಚು ಮಾಡಿಕೊಂಡಿರುವ ರೈತರು ಮಳೆ ಬಾರದಿರುವುದಕ್ಕೆ ಮುಗಿಲ ಕಡೆಗೆ ಮುಖ ಮಾಡಿದ್ದಾರೆ.ಮಳೆಗಾಲದ ಆರಂಭದಲ್ಲಿ ಮುದಗಲ್ ಸುತ್ತಮುತ್ತಲಿನ ಕನ್ನಾಪುರ ಹಟ್ಟಿ, ಆಶಿಹಾಳ, ಖೈರವಾಡಗಿ, ನಾಗರಾಳ, ವಂದಾಲಿ, ಆರ್ಯಭೋಗಾಪುರ, ಬ್ಯಾಲಿಹಾಳ, ಮಾಕಾಪುರ, ಆಮದಿಹಾಳ, ಆದಾಪುರ, ರಾಮತನಾಳ ಸೇರಿ ಹಲವು ಗ್ರಾಮಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಬಿದ್ದಿತ್ತು. ಹೀಗಾಗಿ ರೈತರು ನಿರೀಕ್ಷೆ ಇಟ್ಟುಕೊಂಡು ಬಿತ್ತನೆ ಮಾಡಿದ್ದಾರೆ.