<p><strong>ಕವಿತಾಳ:</strong> ಪಟ್ಟಣದ ವಿವಿಧೆಡೆ ವಿದ್ಯುತ್ ಪರಿವರ್ತಕಗಳು ನೆಲಮಟ್ಟದಲ್ಲಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಜಮೀನುಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕೆ ಬಾಗಿ ತಂತಿಗಳು ಜೋತು ಬಿದ್ದಿದ್ದು ಕೃಷಿ ಚಟುವಟಿಕೆಗೆ ರೈತರು ಹಿಂದೇಟು ಹಾಕುವಂತಾಗಿದೆ.</p>.<p>ಇಲ್ಲಿನ ಹೊರ ವಲಯದ ಮಿಶ್ರಾ ತೋಟದ ಹತ್ತಿರ, ವಸತಿ ನಿಲಯದ ಎದುರು, ಆನ್ವರಿ ಕ್ರಾಸ್ ಮತ್ತು ಚರ್ಚ್ ಎದುರಿನ ವಿದ್ಯುತ್ ಪರಿವರ್ತಕಗಳನ್ನು ಈ ಹಿಂದೆ ಇಲಾಖೆ ನಿಯಮದಂತೆ ಎತ್ತರದಲ್ಲಿ ಅಳವಡಿಸಿದ್ದರೂ ರಸ್ತೆ ದುರಸ್ತಿ ಸಂದರ್ಭದಲ್ಲಿ ರಸ್ತೆ ಎತ್ತರಿಸಿದ ಪರಿಣಾಮ ಈಗ ಸಣ್ಣ ಮಕ್ಕಳ ಕೈಗೂ ಎಟುಕುವಂತಾಗಿವೆ.</p>.<p>‘ನಿತ್ಯ ಶಾಲಾ ಮಕ್ಕಳು ಓಡಾಡುತ್ತಿದ್ದು ಕೆಳಮಟ್ಟದಲ್ಲಿರುವ ಪರಿವರ್ತಕಗಳನ್ನು ಕುತೂಹಲಕ್ಕೆ ಮುಟ್ಟಿದರೂ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ ಹೀಗಾಗಿ ಅವುಗಳನ್ನು ಎತ್ತರದಲ್ಲಿಕೆ ಅಳವಡಿಸಬೇಕು’ ಎಂದು ಕಟ್ಟಡ ಕಾರ್ಮಿಕ ಸಂಘಟನೆ ಮುಖಂಡ ಎಂ.ಡಿ.ಮೆಹಬೂಬ್ ಒತ್ತಾಯಿಸಿದರು.</p>.<p>ಸಮೀಪದ ಇಟ್ಟಂಗಿ ಭಟ್ಟಿ ಹತ್ತಿರದ ಜಮೀನಿನಲ್ಲಿ ಪರಿವರ್ತಕವನ್ನು ತೆಗೆದು ಖಾಲಿ ಬಿಡಲಾಗಿದೆ, ವಿದ್ಯುತ್ ಕಂಬಗಳು ನೆಲಕ್ಕೆ ಬಾಗಿವೆ ಮತ್ತು ತಂತಿಗಳು ಜೋತು ಬಿದ್ದಿವೆ ಅದರ ಸುತ್ತಮುತ್ತ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ತೊಂದರೆ ಉಂಟಾಗುತ್ತಿದೆ, ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ಮಾಳಪ್ಪ ದಿನ್ನಿ ಆರೋಪಿಸಿದರು.</p>.<p>ಜೋತು ಬಿದ್ದ ತಂತಿ ತಗುಲಿ ಬೇಸಿಗೆಯಲ್ಲಿ ಬತ್ತದ ಹುಲ್ಲು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಸುಟ್ಟ ಅನೇಕ ಘಟನೆಗಳು ನಡೆದಿವೆ ಹೀಗಿದ್ದರೂ ಜೆಸ್ಕಾಂ ಅಧಿಕಾರಿಗಳು ತಂತಿ ಮತ್ತು ಕಂಬ ಸರಿಪಡಿಸುವ ಗೋಜಿಗೆ ಹೋಗದಿರುವುದು ಅಚ್ಚರಿ ಮೂಡಿಸಿದೆ.</p>.<div><blockquote>ಎರಡು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಜೆಸ್ಕಾಂ ಅಧಿಕಾರಿಗಳು ಬಾಗಿದ ಕಂಬ ಜೋತು ಬಿದ್ದ ತಂತಿ ತೆರವುಗೊಳಿಸಲು ಮುಂದಾಗುತ್ತಿಲ್ಲ </blockquote><span class="attribution">ಮಾಳಪ್ಪ ದಿನ್ನಿ ರೈತ</span></div>.<div><blockquote>ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿವರ್ತಕಗಳ ಸ್ಥಳಾಂತರಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು </blockquote><span class="attribution">ಬನ್ನಪ್ಪ ಕರಿಬಂಟನಾಳ ಎಇಇ ಜೆಸ್ಕಾಂ ಸಿರವಾರ ವಿಭಾಗ</span></div>.<div><blockquote>ಸಿಬ್ಬಂದಿಯಿಂದ ಮಾಹಿತಿ ಪಡೆದು ಜಮೀನಿನಲ್ಲಿನ ಕಂಬ ನೇರವಾಗಿಸಲು ಮತ್ತು ತಂತಿ ಸರಿಪಡಿಸಲು ಕ್ರಮ ವಹಿಸಲಾಗುವುದು </blockquote><span class="attribution">ಬನ್ನಪ್ಪ ಜೆಸ್ಕಾಂ ಸಹಾಯಕ ಇಂಜಿನಿಯರ್ ಪಾಮನಕಲ್ಲೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತಾಳ:</strong> ಪಟ್ಟಣದ ವಿವಿಧೆಡೆ ವಿದ್ಯುತ್ ಪರಿವರ್ತಕಗಳು ನೆಲಮಟ್ಟದಲ್ಲಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಜಮೀನುಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕೆ ಬಾಗಿ ತಂತಿಗಳು ಜೋತು ಬಿದ್ದಿದ್ದು ಕೃಷಿ ಚಟುವಟಿಕೆಗೆ ರೈತರು ಹಿಂದೇಟು ಹಾಕುವಂತಾಗಿದೆ.</p>.<p>ಇಲ್ಲಿನ ಹೊರ ವಲಯದ ಮಿಶ್ರಾ ತೋಟದ ಹತ್ತಿರ, ವಸತಿ ನಿಲಯದ ಎದುರು, ಆನ್ವರಿ ಕ್ರಾಸ್ ಮತ್ತು ಚರ್ಚ್ ಎದುರಿನ ವಿದ್ಯುತ್ ಪರಿವರ್ತಕಗಳನ್ನು ಈ ಹಿಂದೆ ಇಲಾಖೆ ನಿಯಮದಂತೆ ಎತ್ತರದಲ್ಲಿ ಅಳವಡಿಸಿದ್ದರೂ ರಸ್ತೆ ದುರಸ್ತಿ ಸಂದರ್ಭದಲ್ಲಿ ರಸ್ತೆ ಎತ್ತರಿಸಿದ ಪರಿಣಾಮ ಈಗ ಸಣ್ಣ ಮಕ್ಕಳ ಕೈಗೂ ಎಟುಕುವಂತಾಗಿವೆ.</p>.<p>‘ನಿತ್ಯ ಶಾಲಾ ಮಕ್ಕಳು ಓಡಾಡುತ್ತಿದ್ದು ಕೆಳಮಟ್ಟದಲ್ಲಿರುವ ಪರಿವರ್ತಕಗಳನ್ನು ಕುತೂಹಲಕ್ಕೆ ಮುಟ್ಟಿದರೂ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ ಹೀಗಾಗಿ ಅವುಗಳನ್ನು ಎತ್ತರದಲ್ಲಿಕೆ ಅಳವಡಿಸಬೇಕು’ ಎಂದು ಕಟ್ಟಡ ಕಾರ್ಮಿಕ ಸಂಘಟನೆ ಮುಖಂಡ ಎಂ.ಡಿ.ಮೆಹಬೂಬ್ ಒತ್ತಾಯಿಸಿದರು.</p>.<p>ಸಮೀಪದ ಇಟ್ಟಂಗಿ ಭಟ್ಟಿ ಹತ್ತಿರದ ಜಮೀನಿನಲ್ಲಿ ಪರಿವರ್ತಕವನ್ನು ತೆಗೆದು ಖಾಲಿ ಬಿಡಲಾಗಿದೆ, ವಿದ್ಯುತ್ ಕಂಬಗಳು ನೆಲಕ್ಕೆ ಬಾಗಿವೆ ಮತ್ತು ತಂತಿಗಳು ಜೋತು ಬಿದ್ದಿವೆ ಅದರ ಸುತ್ತಮುತ್ತ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ತೊಂದರೆ ಉಂಟಾಗುತ್ತಿದೆ, ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ಮಾಳಪ್ಪ ದಿನ್ನಿ ಆರೋಪಿಸಿದರು.</p>.<p>ಜೋತು ಬಿದ್ದ ತಂತಿ ತಗುಲಿ ಬೇಸಿಗೆಯಲ್ಲಿ ಬತ್ತದ ಹುಲ್ಲು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಸುಟ್ಟ ಅನೇಕ ಘಟನೆಗಳು ನಡೆದಿವೆ ಹೀಗಿದ್ದರೂ ಜೆಸ್ಕಾಂ ಅಧಿಕಾರಿಗಳು ತಂತಿ ಮತ್ತು ಕಂಬ ಸರಿಪಡಿಸುವ ಗೋಜಿಗೆ ಹೋಗದಿರುವುದು ಅಚ್ಚರಿ ಮೂಡಿಸಿದೆ.</p>.<div><blockquote>ಎರಡು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಜೆಸ್ಕಾಂ ಅಧಿಕಾರಿಗಳು ಬಾಗಿದ ಕಂಬ ಜೋತು ಬಿದ್ದ ತಂತಿ ತೆರವುಗೊಳಿಸಲು ಮುಂದಾಗುತ್ತಿಲ್ಲ </blockquote><span class="attribution">ಮಾಳಪ್ಪ ದಿನ್ನಿ ರೈತ</span></div>.<div><blockquote>ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿವರ್ತಕಗಳ ಸ್ಥಳಾಂತರಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು </blockquote><span class="attribution">ಬನ್ನಪ್ಪ ಕರಿಬಂಟನಾಳ ಎಇಇ ಜೆಸ್ಕಾಂ ಸಿರವಾರ ವಿಭಾಗ</span></div>.<div><blockquote>ಸಿಬ್ಬಂದಿಯಿಂದ ಮಾಹಿತಿ ಪಡೆದು ಜಮೀನಿನಲ್ಲಿನ ಕಂಬ ನೇರವಾಗಿಸಲು ಮತ್ತು ತಂತಿ ಸರಿಪಡಿಸಲು ಕ್ರಮ ವಹಿಸಲಾಗುವುದು </blockquote><span class="attribution">ಬನ್ನಪ್ಪ ಜೆಸ್ಕಾಂ ಸಹಾಯಕ ಇಂಜಿನಿಯರ್ ಪಾಮನಕಲ್ಲೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>