ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ಮಾತನಾಡಿ, ‘ಕೃಷಿ ಚಟುವಟಿಕೆ, ಹೈನುಗಾರಿಕೆ, ಮನೆ ಕೆಲಸಗಳು, ರೊಟ್ಟೆ ತಟ್ಟುವುದು, ಬಡಿಗತನ, ಕವಿ ಕಾವ್ಯ ಪರಿಚಯಿಸುವಂತ ಉಡುಗೆ ತೊಡುಗೆ, ವೃತ್ತಿ ಕೌಶಲಗಳ ವಿಭಿನ್ನ ವೇಷಗಳ ಪ್ರದರ್ಶನ ಸೇರಿದಂತೆ ಅಧುನಿಕತೆ ಭರಾಟೆ ಮರೆತು ಹಳೆಯ ಗ್ರಾಮೀಣ ಸೊಗಡಲ್ಲಿ ತಲ್ಲೀನರಾಗಿರುವಂತೆ ಮಕ್ಕಳು ಪ್ರದರ್ಶನ ನೀಡಿದ್ದಾರೆ. ಶಿಕ್ಷಕರ ಪರಿಶ್ರಮವು ಅಡಗಿದ್ದು ಇದೊಂದು ವಿಶೇಷ ಕಾರ್ಯಕ್ರಮವಾಗಿ ಹೊರ ಹೊಮ್ಮಿದೆ’ ಎಂದು ಹರ್ಷ ಹಂಚಿಕೊಂಡರು.