ಕಳೆದ ವರ್ಷ ಅಡುಗೆ ಸಹಾಯಕರು ಅಕ್ಕಿ ಸರಿಯಾಗಿ ಬೇಯಿಸುತ್ತಿರಲಿಲ್ಲ. ಆಹಾರಧಾನ್ಯ ಸ್ವಚ್ಛ ಮಾಡದ ಕಾರಣ ಬಿಸಿಯೂಟದಲ್ಲಿ ಹಲವು ಬಾರಿ ಹುಳುಗಳು ಪತ್ತೆಯಾಗಿದ್ದವು. ವಿದ್ಯಾರ್ಥಿಗಳು ಹೆದರಿ ಮನೆಯಿಂದ ಊಟ ತರುತ್ತಿದ್ದರು. ಈ ವರ್ಷವಾದರೂ ಈ ತರಹದ ಘಟನೆಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಿ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪೋಷಕರು ಹಾಗೂ ಎಸ್ಡಿಎಂಸಿ ಸದಸ್ಯರು ಒತ್ತಾಯಿಸಿದ್ದಾರೆ.