ಸಿಂಧನೂರು ನಗರದಲ್ಲಿ ಜುಲೈ 5 ರಂದು ಶಾಸಕ ವೆಂಕಟರಾವ್ ನಾಡಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಲಾಕ್ಡೌನ್ಗೆ ತೀರ್ಮಾನಿಸಲಾಗಿದ್ದು, ಜುಲೈ 6 ರಿಂದ ಪ್ರತಿದಿನ ಮಧ್ಯಾಹ್ನ 2 ಗಂಟೆಯಿಂದಲೆ ಎಲ್ಲ ವ್ಯಾಪಾರಿ ಮಳಿಗೆಗಳು, ಬೀದಿ ವ್ಯಾಪಾರ ಸ್ಥಗಿತಗೊಳಿಸಲಾಗುತ್ತಿದೆ. ಔಷಧಿ ಅಂಗಡಿಗಳು, ಬಾರ್ಗಳು ಮಾತ್ರ ತೆರೆದಿರುತ್ತವೆ. ಸರ್ಕಾರಿ ಬಸ್ ಸಂಚಾರವೂ ಇದೆ. ಸಿಂಧನೂರು ತಾಲ್ಲೂಕಿನಲ್ಲಿ ಒಟ್ಟು 29 ಕೋವಿಡ್ ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಿಂದ ನಗರಕ್ಕೆ ಮರಳಿದ ಮೂವರಿಗೂ ಕೋವಿಡ್ ದೃಢವಾದ ಬಳಿಕ ಆತಂಕ ಹೆಚ್ಚಾಗಿದೆ.