ತಹಶೀಲ್ದಾರ್ ಶ್ರೀನಿವಾಸ್ ಚಾಪೆಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಬಿಎಲ್ಓ ಗಳಿಗೆ ಶೇ 90 ರಿಂದ 95 ರಷ್ಟು ಗುರಿ ಸಾಧಿಸುವಂತೆ ಹೇಳಿರುವುದು ನಿಜ. ರೈತರು ಕೂಲಿ ಕಾರ್ಮಿಕರು ಬೆಳಗಿನ ಜಾವ ಲಭ್ಯವಿರುತ್ತಾರೆ. ಆ ಅವಧಿಯಲ್ಲಿ ಕೆಲಸ ನಿರ್ವಹಿಸುವಂತೆ ಪೂರ್ವಭಾವಿ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ. ಬಿಎಲ್ಓಗಳು ಶಾಲಾ ಅವಧಿಯಲ್ಲಿ ಮಕ್ಕಳ ಪಾಠ ಬೋಧನೆಯಲ್ಲಿ ಕಾರ್ಯನಿರ್ವಹಿಸಿ ಶಾಲಾ ಪ್ರಾರಂಭಕ್ಕೂ ಮುನ್ನ ಮತ್ತು ಶಾಲಾ ಅವಧಿ ಮುಗಿದ ನಂತರ ಬಿಎಲ್ಓ ಕರ್ತವ್ಯ ನಿರ್ವಹಿಸುವಂತೆ ಪೂರ್ವಭಾವಿ ಸಭೆಯಲ್ಲಿ ತಿಳಿಸಲಾಗಿತ್ತು. ಆದರೆ ಬಿಎಲ್ಓ ಅವರು ದಿನಾಲೂ ತಡವಾಗಿ ಶಾಲೆಗೆ ಹೋಗುತ್ತಾರೆ ಎಂದು ಮಾಹಿತಿ ಇದೆ. ಹಾಗಾಗಿ ಅವರು ಶಾಲಾವಧಿಯಲ್ಲಿ ಕಾರ್ಯನಿರ್ವಹಿಸುವ ವೇಳೆ ಮಕ್ಕಳನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಇದೆ. ಕ್ಷೇತ್ರ ಶಿಕ್ಷಣಾಧಿಕಾರಿಯೊಂದಿಗೆ ಮಾತನಾಡಿ ವರದಿ ಪಡೆದು ಕ್ರಮಕ್ಕೆ ಸೂಚಿಸುವೆ‘ ಎಂದು ’ಪ್ರಜಾವಾಣಿ‘ಗೆ ತಿಳಿಸಿದರು.