ಗ್ರಾಮದ ಆನಂದ ಶಿವಪ್ಪ (9) ಮೃತ ಬಾಲಕ, ಕುರಿ ಮೇಯಿಸಲು ತೆರಳಿದ್ದ ಆನಂದ ಗ್ರಾಮದ ಕನಕಪ್ಪ ಅವರ ಜಮೀನಿನಲ್ಲಿನ ಕೆರೆಯಲ್ಲಿ ಕುರಿಗಳಿಗೆ ನೀರು ಕುಡಿಸಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ರಸ್ತೆಯಲ್ಲಿ ತೆರಳುತ್ತಿದ್ದ ಯುವಕರು ಗಮನಿಸಿ ಕೆರೆಗೆ ಇಳಿದು ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ ಸ್ವಲ್ಪ ಸಮಯದ ನಂತರ ಬಾಲಕನ ಮೃತ ದೇಹ ಸಿಕ್ಕಿದೆ. ಸ್ಥಳಕ್ಕೆ ಲಿಂಗಸುಗೂರಿನಿಂದ ಅಗ್ನಿ ಶಾಮಕ ಸಿಬ್ಬಂದಿ ಬರುವ ವೇಳಗೆ ಗ್ರಾಮಸ್ಥರು ಮೃತ ದೇಹವನ್ನು ಹೊರ ತೆಗೆದ್ದಿದ್ದರು.