‘ತಾಲ್ಲೂಕು ಕೇಂದ್ರ 25ಕಿ.ಮೀ , ಸಿರವಾರ ಪಟ್ಟಣ 25ಕಿ.ಮೀ ದೂರ ಇದ್ದು, ತುರ್ತು ಸಂದರ್ಭದಲ್ಲಿ ಜಿಲ್ಲಾ ಕೇಂದ್ರಕ್ಕೆ ಹೋಗಲು 50ಕಿ.ಮೀ. ದೂರವನ್ನು ರೋಗಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಇನ್ನಿಲ್ಲದ ಸಮಸ್ಯೆ ಎದುರಾಗಿದೆ. ಗರ್ಭಿಣಿಯರಿಗೆ ಮತ್ತು ನವಜಾತ ಶಿಶುಗಳಿಗೆ ತುರ್ತು ಸಂದರ್ಭಗಳಲ್ಲಿ ಅನುಕೂಲವಾಗಲು ನಗು–ಮಗು ವಾಹನವನ್ನು ಟೈರ್ ಇಲ್ಲದ ಕಾರಣ ಬಳಕೆ ಮಾಡುತ್ತಿಲ್ಲ. ಇಲಾಖೆಯ ಅಧಿಕಾರಿಗಳು ದುರಸ್ತಿಗೆ ಕ್ರಮ ಜರುಗಿಸಿಲ್ಲ’ ಎಂಬುದು ಜನರ ಅಹವಾಲು.