ಲಿಂಗಸುಗೂರು: ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು, ಆದರ್ಶ ಗಳನ್ನು ಎಲ್ಲರೂ ಮೈಗೂಡಿ ಸಿಕೊಳ್ಳಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ತಾಲ್ಲೂಕು ಘಠಕದ ಅಧ್ಯಕ್ಷೆ ಶ್ವೇತಾ ಮೇಟಿ ಹೇಳಿದರು.
ಆನೆಹೊಸೂರು ಗ್ರಾಮದಲ್ಲಿ ಶನಿವಾರ ನಡೆದ ಬಿಜೆಪಿ ನಡಿಗೆ ದಲಿತರ ಕಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿ, ದಲಿತ ಸಮುದಾಯಗಳು ಒಗ್ಗೂಡ ಬೇಕು. ಎಲ್ಲರೂ ಪರಸ್ಪರ ಸಹೋದ ರ ರಂತೆ ಬದುಕುವ ಮೂಲಕ ಅಂಬೇಡ್ಕರ್ ಆಶಯಗಳನ್ನು ಗಟ್ಟಿಗೊಳಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಮುಖಂಡ ಟಿ.ಆರ್ ನಾಯ್ಕ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಜಗನ್ನಾಥ ಕುಲಕರ್ಣಿ ಮಾತನಾಡಿದರು.
ಸಹಭೋಜನ: ಬಿಜೆಪಿ ಮುಖಂಡರಾದ ಉಮೇಶ ಕಾರಜೋಳ, ಟಿ.ಆರ್. ನಾಯ್ಕ ನೇತೃತ್ವದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ದೊಡ್ಡನಗೌಡ ಹೊಸಮನಿ, ಯುವ ಮೋರ್ಚಾ ಅಧ್ಯಕ್ಷ ಭೀಮಶೇನ ಸಹಯೋಗದಲ್ಲಿ ಆಯೋಜಿಸಿದ್ದ ಸಾಮ ರಸ್ಯಕ್ಕಾಗಿ ಸಹಭೋಜನ ಕಾರ್ಯಕ್ರಮದಲ್ಲಿ ಆನೆಹೊಸೂರು ಗ್ರಾಮದ ಎಲ್ಲ ಜಾತಿ ಜನಾಂಗದವರು ಸಹಭೋಜನ ಮಾಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಗವಿಸಿದ್ದಪ್ಪ ಹೆಸರೂರು. ಮುಖಂಡರಾದ ವಿರೇಶ ಬ್ಯಾಗವಾಟ, ಶಿವಪ್ರಕಾಶ, ಶಶಿಗಸ್ತಿ, ಹನುಮೇಶ ಸರಾಫ್, ಆನಂದದಾಸ್, ಶಹಜಾನ ಬೆಂಡೋಣಿ, ಪ್ರಭು ದೊಡ ಮನಿ, ಗ್ಯಾನಪ್ಪ ಭಾವಿಮನಿ, ಅಶೋಕ, ಆನಂದ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.