ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಮಧ್ಯಾಹ್ನ ಪ್ರವಾಹದ ಭೀತಿ ಉಂಟಾಗಿದ್ದು, ತೀರ ನದಿ ದಂಡೆಯಲ್ಲಿನ ಗದ್ದೆಗಳು ಮತ್ತು ಜಮೀನುಗಳು ಮುಳುಗಡೆಯಾಗಿರುವುದು ಕಂಡು ಬಂದಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ. ನದಿಯ ಮೂಲಕ ಏತ ನೀರಾವರಿ ಸೌಲಭ್ಯ ಪಡೆಯಲಾಗಿದ್ದ ರೈತರ ಪಂಪ್ಸೆಟ್ಗಳು ಗುರುವಾರ ಏಕಾಏಕಿಯಾಗಿ ನದಿಗೆ ಪ್ರವಾಹ ಬಂದ ಕಾರಣ ನೀರಿನಲ್ಲಿ ಮುಳುಗಡೆಯಾಗಿದೆ. ಕೆಲವು ರೈತರು ಪ್ರವಾಹವನ್ನು ಲೆಕ್ಕಿಸದೆ ನದಿಯಲ್ಲಿ ಇಳಿದು ಪಂಪ್ಸೆಟ್ಗಳನ್ನು ದಡಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.