ಜಾಲಹಳ್ಳಿ: ಪಟ್ಟಣದಲ್ಲಿ 9 ವರ್ಷಗಳ ಹಿಂದೆ ಕೈಗೆತ್ತಿಕೊಂಡ ಶಾದಿಮಹಲ್ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳದೆ ಪಾಳುಬಿದ್ದಿದ್ದು, ಕಟ್ಟಡದ ಸುತ್ತ ಮುಳ್ಳುಕಂಟಿ ಬೆಳೆದಿದೆ.
ಪಟ್ಟಣ ಸಮೀಪದ ಮುದಗೊಟ್ ರಸ್ತೆ ಪಕ್ಕದಲ್ಲಿ 20 ಗುಂಟೆ ಜಾಗದಲ್ಲಿ ವಿಶಾಲವಾಗಿರುವ ಕಟ್ಟಡ ನಿರ್ಮಿಸಲು ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಅವರು ಶಾಸಕರ ಕ್ಷೇತ್ರ ಅಭಿವೃದ್ಧಿ ಅನುದಾನದಲ್ಲಿ ₹10 ಲಕ್ಷ ಹಣ ಮಂಜೂರು ಮಾಡಿದ್ದರು.