ಮುಖ್ಯ ಶಿಕ್ಷಕ ಮಹಾಂತೇಶ ಸುಪುರ ಮಾತನಾಡಿ, ‘2016–17ನೇ ಸಾಲಿನಲ್ಲಿ ದಾಖಲಾತಿ ಹೊಂದಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ವಯೋಮಿತಿ ಆಧರಿಸಿ ಆಯಾ ತರಗತಿಗಳಿಗೆ ಮಕ್ಕಳ ಸೇರ್ಪಡೆ ಮಾಡುವ ಉದ್ದೇಶ ಹೊಂದಿದ್ದೇವೆ. ಕೆಲ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ವಿವರಿಸಿದರು.