ನಗರದಲ್ಲಿ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹನುಮ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ‘ಬೇರೆಯವರಿಗೆ ಹೋಲಿಸಿದರೆ ನಮ್ಮ ಜನಾಂಗಕ್ಕೆ ಯಾವುದೇ ರೀತಿಯ ಸೌಲಭ್ಯಗಳು ಸರ್ಕಾರದಿಂದ ಸಿಗುವುದಿಲ್ಲ. ವಿದ್ಯೆಗೆ ಅನುಸಾರವಾಗಿ ನಾವು ಹುದ್ದೆಗಳನ್ನು ಪಡೆಯುತ್ತಿದ್ದೇವೆ. ದೇಶಕ್ಕೆ ಬ್ರಾಹ್ಮಣರ ಕೊಡುಗೆ ಅಪಾರವಾದುದು. ವಿಪ್ರರ ಬೆಸೆಯುವ ಟ್ರಸ್ಟ್ 18 ವರ್ಷಗಳಿಂದ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದೆ’ ಎಂದರು.