ಕಾರ್ಯಕ್ರಮದಲ್ಲಿ ರೈತಗೀತೆ, ನಾಡಗೀತೆ, ರಂಗಗೀತೆ, ತತ್ವಪದ, ಹೋರಾಟಗೀತೆ, ಲಾವಣಿ ಪದ, ಜಾನಪದ ಹಾಡುಗಳನ್ನು ಪ್ರಸ್ತುತ ಪಡಿಸಲಾಯಿತು. ಸೋಬಾನೆ ಹಾಡುಗಾರರಾದ ಮಂಜಮ್ಮ, ಕಾಳಮ್ಮ ತಂಡ ಸೋಬಾನೆ ಗಾಯನ ನಡೆಸಿಕೊಟ್ಟರು. ನಂತರ ನಡೆದ ಕವಿಗೊಷ್ಠಿಯಲ್ಲಿ ಶಾಲಿನಿ, ಮಂಜುಳ, ರಾಜೇಶ್ವರಿ, ಬಸವರಾಜು, ಜಿ.ಎಚ್.ಮಂಗಳಗೌರಿ, ಸರೋಜ ಭಾಗವಹಿಸಿ ಕವನ ವಾಚಿಸಿದರು.