ಲಕ್ಷ್ಮೀದೇವಿ ಅಮ್ಮನವರ ದೇಗುಲದ ಪಾರುಪತ್ತೇದಾರ್ ಗಂಗಹನುಮಯ್ಯ, ಅರ್ಚಕ ರಾಮಕೃಷ್ಣ ದೀಕ್ಷಿತ್, ಡೈರಿ ಅಧ್ಯಕ್ಷ ಕೆಂಚೇಗೌಡ, ಅರವಟಿಕೆಯ ವ್ಯವಸ್ಥಾಪಕ ಕೆಂಚೇಗೌಡ ನಿಸ್ವಾರ್ಥ ಸೇವಾ ಕಾರ್ಯಗಳ ಬಗ್ಗೆ ಮಾತನಾಡಿದರು.ಕುಣಿಗಲ್ ಮಾಗಡಿ ಮಾರ್ಗವಾಗಿ ಸಂಚರಿಸುವ ವಾಹನಗಳನ್ನು ನಿಲ್ಲಿಸಿ, ನೀರುಮಜ್ಜಿಗೆ, ಕೋಸಂಬರಿ, ಪಾನಕ, ರಸಾಯನ ವಿತರಿಸಲಾಯಿತು. ಡಾ.ಶಿವಕುಮಾರಸ್ವಾಮಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕೆಂಚನಹಳ್ಳಿ ಸುತ್ತಲಿನ ಗ್ರಾಮಸ್ಥರು ಇದ್ದರು.