ಕುದೂರು: ಖಚಿತ ಮಾಹಿತಿ ಮೇರೆಗೆ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಕುದೂರು ಪೊಲೀಸರು 8 ಮಂದಿ ಜೂಜುಕೋರರನ್ನು ಬಂಧಿಸಿ, ನಗದನ್ನು ವಶಪಡಿಸಿಕೊಂಡಿದ್ದಾರೆ.
ಮರೂರು ಗ್ರಾಮದ ಮುನಿರಾಜು, ಕಾಳೇಗೌಡ, ಶ್ರೀನಿವಾಸ, ಕೃಷ್ಣಮೂರ್ತಿ, ಭೀಮಣ್ಣ, ತಾಳೇಕೆರೆಯ ಕೇಶವ, ಗಣೇಶ್, ಅಣ್ಣೇಶಾಸ್ತ್ರೀ ಪಾಳ್ಯದ ಕುಮಾರ್ ಬಂಧಿತರು. ಬಂಧಿತರಿಂದ ₹77,460, ಒಂದು ಚಾರ್ಜರ್ ಲೈಟ್ ಅನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುದೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜಗದೀಶ್ ನಾಯಕ್ ಹಾಗೂ ತಂಡ ದಾಳಿಯಲ್ಲಿ ಪಾಲ್ಗೊಂಡಿತ್ತು.