ಪೂಜಾ ಕಾರ್ಯಗಳು ಮುಗಿದ ಬಳಿಕ, ತಮಟೆ ವಾದ್ಯ ಮತ್ತು ಆರತಿಗಳೊಂದಿಗೆ ದೇವರುಗಳ ಮೂರ್ತಿಯನ್ನು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಧ್ಯಾಹ್ನ ಹರಕೆ ಹೊತ್ತ ಭಕ್ತರ ಮುಡಿ ತಗೆಯುವ ಕಾರ್ಯ ನಡೆಯಿತು. ಬಸವೇಶ್ವರ, ಮುತ್ತುರಾಯ ಹಾಗೂ ಅವರಸದಮ್ಮ ದೇವಿಯ ಉತ್ಸವ ಮೂರ್ತಿಗಳ ರಥೋತ್ಸವ ಗ್ರಾಮದಲ್ಲಿ ಜರುಗಿತು. ಜಾತ್ರೆ ಪ್ರಯುಕ್ತ ಭಕ್ತರಿಗೆ ಸ್ಥಳೀಯರು ಪಾನಕ, ಮಜ್ಜಿಗೆ ಮತ್ತು ಪ್ರಸಾದ ವ್ಯವಸ್ಥೆ ಮಾಡಿದ್ದರು.