<p><strong>ಚಿಂತಾಮಣಿ</strong>: ನಗರದ ಹೊರ ವಲಯದಲ್ಲಿರುವ ಹಜರತ್ ಸೈಯದ್ ಬಾಬಾ ಬುಡನ್ ಷಾ ವಲಿ ದರ್ಗಾದ 110ನೇ ಗಂಧೋತ್ಸವನ್ನು ಮಂಗಳವಾರ ರಾತ್ರಿ ಅರ್ಥಪೂರ್ಣವಾಗಿ ಆಚರಿಸಲಾಯಿತು.</p>.<p>ನಗರದ ವೆಂಕಟಗಿರಿ ಕೋಟೆಯಲ್ಲಿರುವ ಅಬ್ದುಲ್ ರಶೀದ್ ಕುಟುಂಬಸ್ಥರ ಮನೆಯಿಂದ ಹಜರತ್ ಸೈಯದ್ ಬಾಬಾ ಬುಡನ್ ಷಾ ವಲಿ ಗಂಧೋತ್ಸವು ಪ್ರತಿವರ್ಷದಂತೆ ಈ ವರ್ಷವೂ ಹಮ್ಮಿಕೊಳ್ಳಲಾಯಿತು. </p>.<p>ದರ್ಗಾದ ಮುಜಾವರ್ಗಳು ಮತ್ತು ಫಕೀರರು ಗಂಧೋತ್ಸವ ತೆಗೆದುಕೊಂಡು ವೆಂಕಟಗಿರಿ ಕೋಟೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದರ್ಗಾ ತಲುಪಿದರು. ಅಲ್ಲಿ ಗಂಧವನ್ನು ಸಮರ್ಪಿಸಿ ದೇಶದ ಜನರ ಒಳಿತಿಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.</p>.<p>ಗಂಧವನ್ನು ತೆಗೆದುಕೊಂಡು ಹೋಗುವ ಸೊಂದಲ್ ಮೆರವಣಿಗೆಯು ಪ್ರಮುಖ ಆಕರ್ಷಣೆಯಾಗಿತ್ತು. ಸ್ಥಳೀಯ ಹಾಗೂ ಸುತ್ತಮುತ್ತಲಿನ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ವೀಕ್ಷಿಸಿದರು. ಉರುಸ್ ಅಂಗವಾಗಿ ದರ್ಗಾವನ್ನು ಅಲಂಕರಿಸಲಾಗಿತ್ತು.</p>.<p>ಅಬ್ದುಲ್ ಹಫೀಜ್ ಮಾತನಾಡಿ, 50 ವರ್ಷಗಳಿಂದ ಗಂಧೋತ್ಸವ ನಡೆಸುತ್ತಿದ್ದೇವೆ. ನಮ್ಮ ತಾತ, ತಂದೆ ಕಾಲದಿಂದ ಗಂಧೋತ್ಸವ ನಡೆಸುತ್ತಿದ್ದೇವೆ. ಹಿಂದೂ–ಮುಸ್ಲಿಂ ಒಟ್ಟಾಗಿ ಗಂಧೋತ್ಸವ ಆಚರಿಸುತ್ತೇವೆ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ</strong>: ನಗರದ ಹೊರ ವಲಯದಲ್ಲಿರುವ ಹಜರತ್ ಸೈಯದ್ ಬಾಬಾ ಬುಡನ್ ಷಾ ವಲಿ ದರ್ಗಾದ 110ನೇ ಗಂಧೋತ್ಸವನ್ನು ಮಂಗಳವಾರ ರಾತ್ರಿ ಅರ್ಥಪೂರ್ಣವಾಗಿ ಆಚರಿಸಲಾಯಿತು.</p>.<p>ನಗರದ ವೆಂಕಟಗಿರಿ ಕೋಟೆಯಲ್ಲಿರುವ ಅಬ್ದುಲ್ ರಶೀದ್ ಕುಟುಂಬಸ್ಥರ ಮನೆಯಿಂದ ಹಜರತ್ ಸೈಯದ್ ಬಾಬಾ ಬುಡನ್ ಷಾ ವಲಿ ಗಂಧೋತ್ಸವು ಪ್ರತಿವರ್ಷದಂತೆ ಈ ವರ್ಷವೂ ಹಮ್ಮಿಕೊಳ್ಳಲಾಯಿತು. </p>.<p>ದರ್ಗಾದ ಮುಜಾವರ್ಗಳು ಮತ್ತು ಫಕೀರರು ಗಂಧೋತ್ಸವ ತೆಗೆದುಕೊಂಡು ವೆಂಕಟಗಿರಿ ಕೋಟೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದರ್ಗಾ ತಲುಪಿದರು. ಅಲ್ಲಿ ಗಂಧವನ್ನು ಸಮರ್ಪಿಸಿ ದೇಶದ ಜನರ ಒಳಿತಿಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.</p>.<p>ಗಂಧವನ್ನು ತೆಗೆದುಕೊಂಡು ಹೋಗುವ ಸೊಂದಲ್ ಮೆರವಣಿಗೆಯು ಪ್ರಮುಖ ಆಕರ್ಷಣೆಯಾಗಿತ್ತು. ಸ್ಥಳೀಯ ಹಾಗೂ ಸುತ್ತಮುತ್ತಲಿನ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ವೀಕ್ಷಿಸಿದರು. ಉರುಸ್ ಅಂಗವಾಗಿ ದರ್ಗಾವನ್ನು ಅಲಂಕರಿಸಲಾಗಿತ್ತು.</p>.<p>ಅಬ್ದುಲ್ ಹಫೀಜ್ ಮಾತನಾಡಿ, 50 ವರ್ಷಗಳಿಂದ ಗಂಧೋತ್ಸವ ನಡೆಸುತ್ತಿದ್ದೇವೆ. ನಮ್ಮ ತಾತ, ತಂದೆ ಕಾಲದಿಂದ ಗಂಧೋತ್ಸವ ನಡೆಸುತ್ತಿದ್ದೇವೆ. ಹಿಂದೂ–ಮುಸ್ಲಿಂ ಒಟ್ಟಾಗಿ ಗಂಧೋತ್ಸವ ಆಚರಿಸುತ್ತೇವೆ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>