ನೀರು ಸಂಸ್ಕರಣೆ ಉದ್ದೇಶದಿಂದ ಕೆರೆಯ ಎರಡೂ ಬದಿಯ ನಾಲೆಗಳನ್ನು ಆಧುನೀಕರಣಗೊಳಿಸುವ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕಾಮಗಾರಿ ಕುಂಠಿತಗೊಂಡಿದೆ. ಕಲುಷಿತಗೊಂಡ ನೀರು ಸಂಸ್ಕರಣಗೊಂಡ ನಂತರ ವ್ಯವಸಾಯ ಮಾಡಲು ಇಲ್ಲಿನ ಕೃಷಿಕರು ಆಸಕ್ತಿ ಹೊಂದಿದ್ದರು. ಆದರೆ, ವಾಡಿಕೆಗಿಂತ ಮೊದಲೆ ಹೆಚ್ಚು ಮಳೆ ಬಿದ್ದು ಕೆರೆ ತುಂಬುವ ಹಂತಕ್ಕೆ ಬಂದಿದೆ. ಅನಿವಾರ್ಯವಾಗಿ ಕಾಲುವೆಗಳಿಗೆ ಕಲುಷಿತ ನೀರು ಹರಿಸಬೇಕಾದ ಸ್ಥಿತಿ ಇದೆ.