ಕನಕಪುರ: ಹಾವು ಕಡಿತಕ್ಕೆ ಗಿಡಮೂಲಿಕೆ ಔಷಧಿ ನೀಡುವ ಕುಟುಂಬವೊಂದು ಹಲವು ಜನರ ಜೀವಕ್ಕೆ ವರದಾನ ನೀಡಿದೆ. ತಾಲ್ಲೂಕಿನ ಸಾತನೂರು ಹೋಬಳಿ ಬೊಮ್ಮನಹಳ್ಳಿ ಗ್ರಾಮದ ದೊಡ್ಡಣ್ಣ ಹಾವು ಕಡಿತಕ್ಕೆ ಔಷಧಿ ನೀಡಿ ಗುಣಪಡಿಸುವ ಕೆಲಸಕ್ಕೆ ಹೆಸರಾಗಿದ್ದರು. ಅವರು ಕಾಲವಾದ ನಂತರ ಅವರ ಮಕ್ಕಳಾದ ರಮೇಶ್, ನಾರಾಯಣ, ವೈರಮುಡಿ ಈ ಕಾಯಕ ಮುಂದುವರಿಸಿಕೊಂಡು ಬಂದಿದ್ದಾರೆ.