ಬೆಳಿಗ್ಗೆಯೇ ಪೊಲೀಸ್ ಠಾಣೆಗೆ ಬಂದಿದ್ದ ಆರೋಪಿ ನಾಗರಾಜು, ನನ್ನ ಮಗನನ್ನು ಕೊಲೆ ಮಾಡಿದ್ದು ಶರಣಾಗಲು ಬಂದಿದ್ದೇನೆ ಎಂದು ಹೇಳಿದ್ದಾನೆ. ಕುಡಿದ ಮತ್ತಿನಲ್ಲಿ ಏನೋ ಹೇಳುತ್ತಿದ್ದಾನೆಂದು ಪೊಲೀಸರು ನಿರ್ಲಕ್ಷ್ಯಿಸಿದರು. ಆದರೂ, ಅನುಮಾನದ ಮೇರೆಗೆ ಗ್ರಾಮದವರಿಗೆ ಕರೆ ಮಾಡಿ ವಿಚಾರಿಸಿದಾಗ ಕೊಲೆ ವಿಷಯ ಖಚಿತವಾಗಿದೆ. ಅಲ್ಲದೆ, ನಾಗರಾಜು ಕೊಲೆ ಮಾಡಿರುವುದು ಗೊತ್ತಾಗಿದೆ. ಬಳಿಕ, ಪೊಲೀಸರು ನಾಗರಾಜುನನ್ನು ಬಂಧಿಸಿದ್ದಾರೆ.