‘ಮಾಗಡಿ ಪುರಾತನ ಕಾಲದಿಂದಲೂ ಧರ್ಮಭೂಮಿಯಾಗಿದೆ. ಸಿದ್ದಗಂಗೆಯ ಡಾ.ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಮಾಗಡಿ ಸೀಮೆಯಲ್ಲಿ ಜನಿಸಿ ಜಗದ ಬೆಳಕಾದವವರು. ಅಕ್ಷರ ದಾಸೋಹ, ಅನ್ನದಾಸೋಹದಲ್ಲಿ ಮಠಗಳು ಬಹುಮುಖ್ಯ ಪಾತ್ರವಹಿಸಿವೆ. ಕೆಂಪೇಗೌಡರ ಕಾಲದ 60 ಶರಣ ಮಠಗಳಲ್ಲಿ ಕೆಲವು ಇಂದಿಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿವೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.