<h2><strong>ಕನಕಪುರ: ವನ್ಯಜೀವಿಗಳು ಮತ್ತು ಮನುಷ್ಯರ ನಡುವೆ ನಿರಂತರ ಸಂಘರ್ಷವಾಗುತ್ತಿದ್ದು ಕಾಡಾನೆಗಳು ಶಾಶ್ವತವಾಗಿ ಹೊರಬರದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಜೀವಿ ಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ತಿಳಿಸಿದರು. </strong></h2>.<h2><strong> ತಾಲ್ಲೂಕಿನ ಕಸಬಾ ಹೋಬಳಿ ಮುತ್ತುರಾಯನದೊಡ್ಡಿ ಗ್ರಾಮದಲ್ಲಿ ಆನೆದಾಳಿಯಿಂದ ಮೃತಪಟ್ಟ ವೀರಭದ್ರ ಕುಟುಂಬಕ್ಕೆ $ 15 ಲಕ್ಷ ಪರಿಹಾರದ ಚೆಕ್ನ್ನು ಮೃತರ ಕುಟುಂಬಕ್ಕೆ ನೀಡಿ ಮಾತನಾಡಿದರು. </strong></h2>.<h2><strong> ರಾಮನಗರ ಜಿಲ್ಲೆ ಮತ್ತು ಕನಕಪುರ ತಾಲ್ಲೂಕು ಹೆಚ್ಚು ಕಾಡು ಪ್ರದೇಶದಿಂದ ಆವೃತವಾಗಿದ್ದು ಕಾಡಾನೆಗಳು ರೈತರ ಜಮೀನಿಗೆ ದಾಳಿ ನಡೆಸಿ ರೈತರ ಜೀವ ಮತ್ತು ಜೀವನಕ್ಕೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು. </strong></h2>.<h2><strong> ಕಾಡು ಪ್ರಾಣಿಗಳ ತಡೆಗೆ ಸೋಲಾರ್ ಪೆನ್ಸಿಂಗ್ ಮತ್ತು ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಕ್ರಮ ಕೈಗೊಳ್ಳಲು ಈಗಾಗಲೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದು ಶೀಘ್ರವಾಗಿ ಕ್ರಮಕ್ಕೆ ಚಿಂತನೆ ನಡೆಸಲಾಗಿದೆ ಎಂದರು. </strong></h2>.<h2><strong> ಅರಣ್ಯದಿಂದ ಹೊರಬಂದು ದಾಂದಲೆ ಮಾಡುವ ಪುಂಡಾನೆಗಳನ್ನು ಗುರುತಿಸಿ ಅವುಗಳನ್ನು ಸೆರೆಹಿಡಿದು ಮತ್ತೆ ಅರಣ್ಯದೊಳಗೆ ಬಿಡಲು ತಂಡವನ್ನು ರಚಿಸಲಾಗಿದೆ. ಅದಲ್ಲದೆ ಕಾಡು ಪ್ರಾಣಿಗಳ ತಡೆಗೆ ಇನ್ನೂ ಅನೇಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.</strong></h2>.<h2><strong> ಆನೆ ದಾಳಿಯಿಂದ ಮೃತಪಟ್ಟಿರುವ ಸಂತ್ರಸ್ತ ಕುಟುಂಬಕ್ಕೆ ಪರಿಹಾರವನ್ನು ನೀಡಿದ್ದು ಮೃತರ ಪತ್ನಿ ಹೆಸರಲ್ಲಿ ಬ್ಯಾಂಕ್ ಖಾತೆ ಇಲ್ಲದಿರುವುದರಿಂದ ಚೆಕ್ ನೀಡಿದ್ದು ಶೀಘ್ರವಾಗಿ ಬ್ಯಾಂಕ್ ಅಕೌಂಟ್ ಮಾಡಿಸಿ ಹಣ ಪಡೆದುಕೊಳ್ಳುವಂತೆ ತಿಳಿಸಿ, ಇಲಾಖೆಯಿಂದ ದೊರೆಯುವ ಬೇರೆ ಸವಲತ್ತುಗಳನ್ನು ಕೊಡಿಸುವುದಾಗಿ ತಿಳಿಸಿದರು. </strong></h2>.<h2><strong> ಅರಣ್ಯ ಇಲಾಖೆಯಿಂದ ರೈತರಿಗೆ ನೀಡುವ ಸಸಿಗಳ ಬೆಲೆಯನ್ನು ಹೆಚ್ಚಿಸಿದ್ದು ಇದರಿಂದ ಅರಣ್ಯೀಕರಣಕ್ಕೆ ಹಿನ್ನಡೆಯಾಗುತ್ತಿದೆ ಎಂದು ಮಾದ್ಯಮದವರು ಕೇಳಿದಾಗ ಇಲಾಖೆಯಿಂದ ಎಲ್ಲೆಲ್ಲಿ ಸಸಿಗಳನ್ನು ಬೆಳಸಲಾಗುತ್ತಿದೆ ಎಂದು ಪರಿಶೀಲಿಸಿ ಅಧಿಕಾರಿಗಳ ಜತೆ ಮಾತನಾಡಿ ದರ ಕಡಿಮೆ ಮಾಡಲು ಯತ್ನಿಸುವುದಾಗಿ ಹೇಳಿದರು. </strong></h2>.<h2><strong> ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. </strong></h2>.<h2><strong> ಸಚಿವರು ಮೊದಲಿಗೆ ಕನಕಪುರದಲ್ಲಿರುವ ಸಂಸದರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿ ನಂತರ ಮುತ್ತರಾಯನದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಆನೆ ದಾಳಿಯಿಂದ ಮೃತಪಟ್ಟ ವೀರಭದ್ರಯ್ಯ ಅವರ ಕುಟುಂಬಕ್ಕೆ ಪರಿಹಾರ ನೀಡಿದರು.</strong></h2>.<h2><strong> ಸಚಿವರು ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ಮುತ್ತರಾಯನದೊಡ್ಡಿಯಿಂದ ಹೊಸ ಕಬ್ಬಾಳು ಗ್ರಾಮಕ್ಕೆ ತೆರಳಿ ಆನೆದಾಳಿಯಿಂದ ಮೃತಪಟ್ಟ ಕಾಳಯ್ಯ ಅವರ ಮನೆಗೆ ಭೇಟಿ ನೀಡಿ ಕಾಳಯ್ಯ ಅವರ ಪತ್ನಿ ಬರಗಮ್ಮ ಅವರಿಗೆ $ 15 ಲಕ್ಷ ಪರಿಹಾರದ ಚೆಕ್ ವಿತರಣೆ ಮಾಡಿ ಕುಟುಂಬಕ್ಕೆ ಶಾಂತ್ವಾನ ತಿಳಿಸಿದರು. </strong></h2>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2><strong>ಕನಕಪುರ: ವನ್ಯಜೀವಿಗಳು ಮತ್ತು ಮನುಷ್ಯರ ನಡುವೆ ನಿರಂತರ ಸಂಘರ್ಷವಾಗುತ್ತಿದ್ದು ಕಾಡಾನೆಗಳು ಶಾಶ್ವತವಾಗಿ ಹೊರಬರದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಜೀವಿ ಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ತಿಳಿಸಿದರು. </strong></h2>.<h2><strong> ತಾಲ್ಲೂಕಿನ ಕಸಬಾ ಹೋಬಳಿ ಮುತ್ತುರಾಯನದೊಡ್ಡಿ ಗ್ರಾಮದಲ್ಲಿ ಆನೆದಾಳಿಯಿಂದ ಮೃತಪಟ್ಟ ವೀರಭದ್ರ ಕುಟುಂಬಕ್ಕೆ $ 15 ಲಕ್ಷ ಪರಿಹಾರದ ಚೆಕ್ನ್ನು ಮೃತರ ಕುಟುಂಬಕ್ಕೆ ನೀಡಿ ಮಾತನಾಡಿದರು. </strong></h2>.<h2><strong> ರಾಮನಗರ ಜಿಲ್ಲೆ ಮತ್ತು ಕನಕಪುರ ತಾಲ್ಲೂಕು ಹೆಚ್ಚು ಕಾಡು ಪ್ರದೇಶದಿಂದ ಆವೃತವಾಗಿದ್ದು ಕಾಡಾನೆಗಳು ರೈತರ ಜಮೀನಿಗೆ ದಾಳಿ ನಡೆಸಿ ರೈತರ ಜೀವ ಮತ್ತು ಜೀವನಕ್ಕೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು. </strong></h2>.<h2><strong> ಕಾಡು ಪ್ರಾಣಿಗಳ ತಡೆಗೆ ಸೋಲಾರ್ ಪೆನ್ಸಿಂಗ್ ಮತ್ತು ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಕ್ರಮ ಕೈಗೊಳ್ಳಲು ಈಗಾಗಲೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದು ಶೀಘ್ರವಾಗಿ ಕ್ರಮಕ್ಕೆ ಚಿಂತನೆ ನಡೆಸಲಾಗಿದೆ ಎಂದರು. </strong></h2>.<h2><strong> ಅರಣ್ಯದಿಂದ ಹೊರಬಂದು ದಾಂದಲೆ ಮಾಡುವ ಪುಂಡಾನೆಗಳನ್ನು ಗುರುತಿಸಿ ಅವುಗಳನ್ನು ಸೆರೆಹಿಡಿದು ಮತ್ತೆ ಅರಣ್ಯದೊಳಗೆ ಬಿಡಲು ತಂಡವನ್ನು ರಚಿಸಲಾಗಿದೆ. ಅದಲ್ಲದೆ ಕಾಡು ಪ್ರಾಣಿಗಳ ತಡೆಗೆ ಇನ್ನೂ ಅನೇಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.</strong></h2>.<h2><strong> ಆನೆ ದಾಳಿಯಿಂದ ಮೃತಪಟ್ಟಿರುವ ಸಂತ್ರಸ್ತ ಕುಟುಂಬಕ್ಕೆ ಪರಿಹಾರವನ್ನು ನೀಡಿದ್ದು ಮೃತರ ಪತ್ನಿ ಹೆಸರಲ್ಲಿ ಬ್ಯಾಂಕ್ ಖಾತೆ ಇಲ್ಲದಿರುವುದರಿಂದ ಚೆಕ್ ನೀಡಿದ್ದು ಶೀಘ್ರವಾಗಿ ಬ್ಯಾಂಕ್ ಅಕೌಂಟ್ ಮಾಡಿಸಿ ಹಣ ಪಡೆದುಕೊಳ್ಳುವಂತೆ ತಿಳಿಸಿ, ಇಲಾಖೆಯಿಂದ ದೊರೆಯುವ ಬೇರೆ ಸವಲತ್ತುಗಳನ್ನು ಕೊಡಿಸುವುದಾಗಿ ತಿಳಿಸಿದರು. </strong></h2>.<h2><strong> ಅರಣ್ಯ ಇಲಾಖೆಯಿಂದ ರೈತರಿಗೆ ನೀಡುವ ಸಸಿಗಳ ಬೆಲೆಯನ್ನು ಹೆಚ್ಚಿಸಿದ್ದು ಇದರಿಂದ ಅರಣ್ಯೀಕರಣಕ್ಕೆ ಹಿನ್ನಡೆಯಾಗುತ್ತಿದೆ ಎಂದು ಮಾದ್ಯಮದವರು ಕೇಳಿದಾಗ ಇಲಾಖೆಯಿಂದ ಎಲ್ಲೆಲ್ಲಿ ಸಸಿಗಳನ್ನು ಬೆಳಸಲಾಗುತ್ತಿದೆ ಎಂದು ಪರಿಶೀಲಿಸಿ ಅಧಿಕಾರಿಗಳ ಜತೆ ಮಾತನಾಡಿ ದರ ಕಡಿಮೆ ಮಾಡಲು ಯತ್ನಿಸುವುದಾಗಿ ಹೇಳಿದರು. </strong></h2>.<h2><strong> ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. </strong></h2>.<h2><strong> ಸಚಿವರು ಮೊದಲಿಗೆ ಕನಕಪುರದಲ್ಲಿರುವ ಸಂಸದರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿ ನಂತರ ಮುತ್ತರಾಯನದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಆನೆ ದಾಳಿಯಿಂದ ಮೃತಪಟ್ಟ ವೀರಭದ್ರಯ್ಯ ಅವರ ಕುಟುಂಬಕ್ಕೆ ಪರಿಹಾರ ನೀಡಿದರು.</strong></h2>.<h2><strong> ಸಚಿವರು ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ಮುತ್ತರಾಯನದೊಡ್ಡಿಯಿಂದ ಹೊಸ ಕಬ್ಬಾಳು ಗ್ರಾಮಕ್ಕೆ ತೆರಳಿ ಆನೆದಾಳಿಯಿಂದ ಮೃತಪಟ್ಟ ಕಾಳಯ್ಯ ಅವರ ಮನೆಗೆ ಭೇಟಿ ನೀಡಿ ಕಾಳಯ್ಯ ಅವರ ಪತ್ನಿ ಬರಗಮ್ಮ ಅವರಿಗೆ $ 15 ಲಕ್ಷ ಪರಿಹಾರದ ಚೆಕ್ ವಿತರಣೆ ಮಾಡಿ ಕುಟುಂಬಕ್ಕೆ ಶಾಂತ್ವಾನ ತಿಳಿಸಿದರು. </strong></h2>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>