ಕುದೂರು: ಪಟ್ಟಣದ ಇತಿಹಾಸ ಪ್ರಸಿದ್ಧ ಭೈರವದುರ್ಗ ಬೆಟ್ಟದಲ್ಲಿ ನೆಲೆಸಿರುವ ಭೈರವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮತ್ತು ಸ್ವಾಮಿಯ ನೂತನ ಪಾದದ ಗುಡಿಯ ಉದ್ಘಾಟನಾ ಸಮಾರಂಭ ಮಾರ್ಚ್ 17, 18 ರಂದು ನಡೆಯಲಿದೆ.
ಮಾರ್ಚ್ 17ರಂದು ಮಧ್ಯಾಹ್ನ 12 ಗಂಟೆಗೆ ಭೈರವೇಶ್ವರ ಸ್ವಾಮಿಯ ಪಾದದ ಗುಡಿಯ ಉದ್ಘಾಟನೆ ಹಾಗೂ ಹೋಮ ಹವನಗಳು ನಡೆಯಲಿದೆ. ಸಂಜೆ 6.30ಕ್ಕೆ ಭೈರವೇಶ್ವರ ಸ್ವಾಮಿಯ ರಥೋತ್ಸವವನ್ನು ಎನ್. ಹೊಸಪಾಳ್ಯ ಗ್ರಾಮಸ್ಥರು ನಡೆಸಲಿದ್ದಾರೆ.
ಮಾರ್ಚ್ 18ರಂದು ಸಂಜೆ 7:30ಕ್ಕೆ ಭೈರವೇಶ್ವರ ಸ್ವಾಮಿಯ ಮುತ್ತಿನ ಪಲ್ಲಕ್ಕಿ ಉತ್ಸವವನ್ನು ದಾಸಪ್ಪನಪಾಳ್ಯ ಮತ್ತು ಪರ್ವತನಪುರ ಗ್ರಾಮಸ್ಥರು ನಡೆಸಲಿದ್ದಾರೆ.