ತಿಮ್ಮೇಗೌಡನಪಾಳ್ಯದ ಮಂಜುನಾಥ್ ಬಾಬು ಅವರ ಫಾರ್ಮ್ಹೌಸ್ನಲ್ಲಿ ಹುಟ್ಟುಹಬ್ಬ ಆಚರಣೆಯ ವೇಳೆ ಗಲಾಟೆಯಾಗಿ, ಅಶೋಕ ಎಂಬಾತನನ್ನು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಶಿವಕುಮಾರ್, ನಾಗೇಶ್, ಮಾರುತಿ, ಶೋಭಿತ್, ದಿಲೀಪ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಮಾಹಿತಿ ನೀಡಿದರು.