ಕುದೂರು: ಮದ್ಯ ಮಾರಾಟದ ಪರವಾನಗಿ ಹೊಂದದೆ ಅಕ್ರಮವಾಗಿ ಚಿಲ್ಲರೆ ಅಂಗಡಿಯಲ್ಲಿ ಮದ್ಯ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯ ವಿರುದ್ಧ ಕುದೂರು ಪೊಲೀಸ್ ಠಾಣೆಯಲ್ಲಿ ಈಚೆಗೆ ಪ್ರಕರಣ ದಾಖಲಾಗಿದೆ.
ಸೋಲೂರು ಹೋಬಳಿಯ ಕಂಬದಕಲ್ಲು ಗ್ರಾಮದ ಕೃಷ್ಣಮೂರ್ತಿ ವಿರುದ್ಧ ಪ್ರಕರಣ ದಾಖಲಾಗಿದೆ. ಖಚಿತ ಮಾಹಿತಿ ಮೇರೆಗೆ ಸಾದಾ ಉಡುಪಿನಲ್ಲಿ ತೆರಳಿದ್ದ ಪೊಲೀಸರನ್ನು ನೋಡಿ ಅಂಗಡಿ ಮಾಲೀಕ ಪರಾರಿಯಾಗಿದ್ದಾನೆ.
ವಿವಿಧ ಕಂಪನಿಗಳ ಬಿಯರ್ ಬಾಕ್ಸ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.