ಮಾಗಡಿ: ತಾಲ್ಲೂಕಿನ ಸೋಲೂರು ಹೋಬಳಿ ತಟ್ಟೆಕೆರೆ ಬೆಟ್ಟದ ರಂಗನಾಥ ಜಾತ್ರೆಯ ಅಂಗವಾಗಿ ಶುಕ್ರವಾರ ಮಧ್ಯಾಹ್ನ ರಥೋತ್ಸವ ವೈಭವದಿಂದ ನಡೆಯಿತು.
ಹೋಮ–ಹವನಗಳು ನಡೆದ ನಂತರ ಅಲಂಕೃತ ರಂಗನಾಥ ಮತ್ತು ಉಭಯ ಅಮ್ಮನವರನ್ನು ಅಲಂಕೃತ ರಥದ ಮೇಲಿಟ್ಟು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಗೊರೂರು, ಸೋಲೂರು, ತಟ್ಟೆಕೆರೆ ಹಾಗೂ ಸುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ನವದಂಪತಿಗಳು ರಥದ ಮೇಲೆ ಜೋಡಿ ಬಾಳೆಹಣ್ಣು ಎಸೆದು ಹರಕೆ ಸಲ್ಲಿಸಿದರು. ಸಾಮೂಹಿಕ ಅನ್ನದಾನ ನಡೆಯಿತು.