ರಾಮನಗರ ಜಿಲ್ಲಾ ಕುಂಬಾರ ಮಹಾ ಸಂಘದ ಉಪಾಧ್ಯಕ್ಷ ಎಂ.ರಾಮಕೃಷ್ಣ ಮಾತನಾಡಿ, ‘ಎಲ್ಲೆಂದರಲ್ಲಿ ತ್ಯಾಜ್ಯ ಹರಡುವುದರಿಂದ ನಾನಾ ರೀತಿಯ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಅನೈರ್ಮಲ್ಯದಿಂದ ಪ್ರಾಣಕ್ಕೆ ಕುತ್ತು ಬರುತ್ತದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು’ ಎಂದರು.
ಹಿರಿಯ ಜಾನಪದ ಗಾಯಕ ಚೌ.ಪು. ಸ್ವಾಮಿ ಹಾಗೂ ಯುವ ಕವಿ ಅಬ್ಬೂರು ಶ್ರೀನಿವಾಸ್ ಜಾಗೃತಿ ಗೀತೆಗಳನ್ನು ಹಾಡಿದರು. ಗ್ರಾಮಸ್ಥರಾದ ಆರ್.ಎಸ್. ಹೇಮಂತ್, ಹರ್ಷಿತ್, ಸಣ್ಣಪ್ಪ, ಬೋರಮ್ಮ, ಪದ್ಮಮ್ಮ, ನಿಂಗಮ್ಮ, ಶ್ರೀನಿವಾಸ, ಜಯಲಕ್ಷ್ಮಿ, ಜಸ್ವಂತ್ ಹಾಗೂ ಸ್ಟೆಪ್ಸ್ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.