ನವೀನ್ ಕುಮಾರ್ ಎಂಬುವರು ತಮ್ಮ ದ್ವಿಚಕ್ರ ವಾಹನದಲ್ಲಿ ಕೆಂಚನಪುರ ಗ್ರಾಮದ ಬಳಿ ಇರುವ ಆಭಯ ಆಂಜನೇಯ ದೇವಾಲಯಕ್ಕೆ ಶುಕ್ರವಾರ ಬಂದಿದ್ದಾರೆ. ದೇವಾಲಯದಲ್ಲಿ ಪೂಜೆ ಮುಗಿಸಿ ಅಲ್ಲೆ ಪಕ್ಕದಲ್ಲಿದ್ದ ಲೇಔಟ್ ಬಳಿ ಫೋನ್ನಲ್ಲಿ ಮಾತನಾಡುತ್ತಿರುವಾಗ ಮೂವರು ಅಪರಿಚಿತರು ಬಂದು ನವೀನ್ಗೆ ಹೆದರಿಸಿ ಎರಡು ಮೊಬೈಲ್, 15 ಗ್ರಾಂ ತೂಕದ ಚಿನ್ನದ ಸರ ಹಾಗೂ ಪರ್ಸ್ನ್ಲಲಿದ್ದ ₹ 2 ಸಾವಿರಹಾಗೂ ಪೋನ್ ಪೇ ಮೂಲಕ₹ 4,500 ಹಾಕಿಸಿಕೊಂಡು ಓಡಿ ಹೋಗಿದ್ದಾರೆ.