ಕೋಡಿಹಳ್ಳಿ ಹಿಪ್ಪೋಕ್ಯಾಂಪಸ್ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಚಂದನ್, ಶನಿವಾರ ತಾಯಿಯ ಮನೆ ಅರಳಗಡಕಲು ಗ್ರಾಮಕ್ಕೆ ಬಂದಿದ್ದ. ಅವರ ಜಮೀನಿನಲ್ಲಿ ಚಂದ್ರು ಎಂಬುವರು ಟ್ರಾಕ್ಟರ್ನಿಂದ ಉಳುಮೆ ಮಾಡುತ್ತಿದ್ದರು. ಆಗ ಬಾಲಕ ಸಹ ಟ್ರಾಕ್ಟರ್ ಏರಿ ಕುಳಿತಿದ್ದ. ಉಳುಮೆ ಮಾಡುವಾಗ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಟ್ರಾಕ್ಟರ್ ಪಲ್ಟಿಯಾಗಿದೆ. ಆಗ ಟ್ರಾಕ್ಟರ್ ತಳದಲ್ಲಿ ಸಿಲುಕಿದ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಚಂದ್ರು ಜಿಗಿದಿದ್ದರಿಂದ ಪಾರಾಗಿದ್ದಾರೆ.