ನಾರಸಿಂಹ ಸರ್ಕಲ್ ಬಳಿ ಸಾರ್ವಜನಿಕ ವಿನಾಯಕಸ್ವಾಮಿ ದೇವಾಲಯವಿದೆ. ದೇವಾಲಯದ ಪಕ್ಕದ ರಸ್ತೆ ಮೇಲೆ ಸೊಪ್ಪು, ತರಕಾರಿ, ಅವರೆಕಾಯಿ, ಹಣ್ಣು ಹಂಪಲು ಮಾರಾಟ ಮಾಡುತ್ತಾರೆ. ವಾಹನಗಳು ಮುಂದೆ ಹೋಗಲು ಪರದಾಡಬೇಕಿದೆ. ರಸ್ತೆ ಮೇಲೆ ಸೊಪ್ಪು, ತರಕಾರಿ ಮಾರಾಟ ಮಾಡುವುದನ್ನು ತೆರವುಗೊಳಿಸಬೇಕು ಎಂದು ವೀರಭದ್ರಯ್ಯ ಆಗ್ರಹಿಸಿದರು.