ಮಾಗಡಿ: ತಾಲ್ಲೂಕಿನಾದ್ಯಂತ ನರಕ ಚತುರ್ದಶಿ ಹಾಗೂ ಬಲಿಪಾಡ್ಯಮಿ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ತಾಲ್ಲೂಕಿನ ಕಲ್ಯಾ ಗ್ರಾಮದಲ್ಲಿ ಗಾಂಧೀವೇಷಧಾರಿ ಮರಿಯಪ್ಪ ಅವರ ಮನೆಯಂಗಳದಲ್ಲಿ, ಹಸುವಿನ ಸೆಗ-ಣಿಯಲ್ಲಿ ಕಟ್ಟೆಯನ್ನು ಕಟ್ಟಿ, ಹೊಲದಲ್ಲಿಬೆಳೆದಿರುವ ಜೋಳ ಮತ್ತು ರಾಗಿ, ನವಣೆ, ಸಜ್ಜೆ ತೆನೆಗಳಿಂದ ಬಲೀಂದ್ರ ಸ್ವಾಮಿಯನ್ನು ತಯಾರಿಸಿ, ತಂಗಟೆ ಹೂವಿನಿಂದ ಅಲಂಕರಿಸಿ, ಹಸುವಿನ ಹಾಲುತುಪ್ಪವನ್ನು ಸುರಿದು ಪಶುಪಕ್ಷಿ ಪ್ರಾಣಿ, ಮಾನವರಿಗೆ ಒಳಿತಾಗಲಿ ಎಂದು ಪೂಜಿಸಲಾಯಿತು.
ತಾಲ್ಲೂಕಿನ ತಿಪ್ಪಸಂದ್ರ,ಕುದೂರು, ಸೋಲೂರು, ಮಾಡಬಾಳ್, ಚೌಡಿ ಬೇಗೂರು, ಕಣ್ಣೂರು, ಶ್ರೀಗಿರಿಪುರ ಗೊಲ್ಲರಹಟ್ಟಿ, ಹುಲಿಕಲ್, ಸುಗ್ಗನಹಳ್ಳಿ, ಗುಡೇಮಾರನ ಹಳ್ಳಿ, ಸಾವನದುರ್ಗ, ಮತ್ತಿಕೆರೆ, ಅಗಲಕೋಟೆ ಇತರೆಡೆ ದೀಪಾವಳಿಯನ್ನು ಸಡಗರದಿಂದ ಪಟಾಕಿ ಸಿಡಿಸಿ ಆಚರಿಸಿದರು.