‘ಕಚ್ಚಾ ಗೂಡನ್ನು ನೂಲನ್ನಾಗಿ ಸಂಸ್ಕರಿಸುವ ಪ್ರಕ್ರಿಯೆಯಿಂದ ನೂಲಿನ ಸ್ವರೂಪ ಬದಲಾಗುವುದಿಲ್ಲ. ಅದನ್ನು ಶುಭ್ರಗೊಳಿಸಿ, ಬಲಗೊಳಿಸಿ ಸುತ್ತಲಾ ಗುತ್ತದೆಯೇ ಹೊರತು ಬಣ್ಣವನ್ನಾಗಿ, ಗಾತ್ರವನ್ನಾಗಲಿ ಬದಲಿ ಸುವುದಿಲ್ಲ. ಸಂಸ್ಕರಿತ ನೂಲನ್ನು ಯಥಾವತ್ತಾಗಿ ಕಟ್ಟಿ ನೇಕಾರರಿಗೆ ನೀಡಲಾಗುತ್ತಿದೆ. ಹೀಗಾಗಿ ಇದಕ್ಕೆ ತೆರಿಗೆ ಹಾಕುವುದು ನ್ಯಾಯ ಸಮ್ಮತವಲ್ಲ. ಸರ್ಕಾರ ಈ ನಿರ್ಧಾರ ಕೈಬಿಟ್ಟು, ನೂಲಿಗೂ ತೆರಿಗೆ ವಿನಾಯಿತಿ ನೀಡಬೇಕು’ ಎಂದು ಆಗ್ರಹಿಸಿದರು.