ಯಲೋದಹಳ್ಳಿ ಗ್ರಾಮದ ರೈತರ ಬಹುತೇಕ ಹೊಲ ಮತ್ತು ತೋಟಗಳು ಗುಡ್ಡದ ಬದಿಯಲ್ಲಿದ್ದು, ಕರಡಿ, ಚಿರತೆ ಮತ್ತು ಹಂದಿಗಳು ನಿರಂತರವಾಗಿ ರೈತರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿವೆ. ಅರಣ್ಯ ಇಲಾಖೆ ರೈತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಆರ್.ರವಿಕುಮಾರ್ ಒತ್ತಾಯಿಸಿದ್ದಾರೆ.