ಶಿವಮೊಗ್ಗದ ಕೃಷಿ ನಗರದ ಎಂ.ಬಿ.ಸಂಕೇತ್ ಅವರು ಶ್ರೀರಾಮಪುರದ ಎಂ.ಆಶಾ ಅವರಿಂದ 17.5 ಗುಂಟೆ ಜಮೀನು ಖರೀದಿಸಿದ್ದರು. ಅದನ್ನು ತಮ್ಮ ತಾಯಿ ಬಿ.ಎಂ.ವೀಣಾ ಅವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದರು. ಈ ಜಮೀನನ್ನು ಖಾತೆ ಮಾಡಿಸಿಕೊಡಲು ಸಂಕೇತ್ ಗಾಡಿಕೊಪ್ಪ ವೃತ್ತದ ವಿಎ ಜಿ.ಸುರೇಶ್ ಅವರ ಬಳಿ ಕೇಳಿದ್ದರು. ಅದಕ್ಕೆ ಸುರೇಶ್ ₹ 6,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಸಂಕೇತ್ ಶಿವಮೊಗ್ಗದ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.