ಭಾರತೀಯ ವೈದ್ಯಕೀಯ ಸಂಘ ನೀಡಿದ್ದ ಕರೆಗೆ ಸ್ಪಂದಿಸಿದ ನಗರದ ಪ್ರತಿಷ್ಠಿತ ನಂಜಪ್ಪ ಆಸ್ಪತ್ರೆ, ನಾರಾಯಣ ಹೃದಯಾಲಯ, ಮೆಟ್ರೊ, ಸರ್ಜಿ, ಮ್ಯಾಕ್ಸ್, ಬಸವೇಶ್ವರ ಆಸ್ಪತ್ರೆಗಳ ವೈದ್ಯರು ಮುಷ್ಕರದಲ್ಲಿ ಭಾಗಿಯಾದರು. ‘ಆಸ್ಪತ್ರೆಗಳ ಮುಂದೆ ಒಪಿಡಿ ಸೇವೆ ಇಲ್ಲ’ ಎಂಬ ನಾಮ ಫಲಕ ಹಾಕಲಾಗಿತ್ತು. ತುರ್ತು ವಿಭಾಗಗಳು ಹಾಗೂ ಔಷಧ ಕೇಂದ್ರಗಳ ಸೇವೆ ಎಂದಿನಂತೆ ಮುಂದುವರಿದಿತ್ತು.