ಹಿರಿಯ ವಿಮರ್ಶಕ ಡಾ. ರಾಜಪ್ಪ ದಳವಾಯಿ ಮಾತನಾಡಿ, ‘ಬದುಕಿಗೆ ಬದಲಾವಣೆ ತರುವಂತಹ ಸಂಗತಿಯ ಕಣಜವೇ ಈ ಪುಸ್ತಕ. ಲೇಖಕನಿಗೆ ನೈತಿಕ ಪ್ರಜ್ಞೆ ಇರಬೇಕು. ಅದನ್ನು ಈ ಆತ್ಮಕಥೆಯ ಮೂಲಕ ಸಮಾಜಕ್ಕೆ ಪರಿಚಯಿಸಲಾಗಿದೆ. ಪುಸ್ತಕ ಪತ್ತೇದಾರಿ ಕಾದಂಬರಿ ಓದಿದಷ್ಟೇ ಕುತೂಹಲವಾಗಿದೆ. ಕನ್ನಡದ್ದೇ ಪುಸ್ತಕ ಅನ್ನುವಂತೆ, ಅನುವಾದ ಮಾಡಲಾಗಿದೆ’ ಎಂದು ಹೇಳಿದರು.