ರೋಟರಿ ಜಿಲ್ಲಾ ಜಂಟಿ ಕಾರ್ಯದರ್ಶಿ ವೀರಣ್ಣ ಹುಗ್ಗಿ ಸಸಿಗೆ ನೀರೆರೆಯುವ ಮೂಲಕ ಸಮಾರೋಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ಮೀಡಿಯಂ ಟಿ.ವಿ. ಚಾನಲ್ ಮುಖ್ಯಸ್ಥ ಹೊನ್ನಾಳಿ ಚಂದ್ರಶೇಖರ್ ಸಮಾರೋಪ ಭಾಷಣ ಮಾಡಿದರು. ಶಿಕ್ಷಣ ಇಲಾಖೆಯ ಅಧಿಕಾರಿ ಗಣಪತಿ, ಸ್ಥಳೀಯ ನಿವಾಸಿಗಳಾದ ಪ್ರೊ.ಪದ್ಮನಾಭ್, ವಿದ್ವಾನ್ ಕೇಶವಕುಮಾರ್, ಟಿ.ಪಿ. ನಾಗರಾಜ್, ಪರಮೇಶ್ವರ ಶಿಗ್ಗಾಂವ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶಿವಯೋಗಿ ಉಪಸ್ಥಿತರಿದ್ದರು.