ಶಿಕ್ಷಕರು ಜೀವನದಲ್ಲಿ ಸಾಮಾನ್ಯ ಜ್ಞಾನ ಹೊಂದಿರಬೇಕು. ಶಿಕ್ಷಣಕ್ಕೆ ಪೂರಕವಾಗಿ ನಾಟಕ ಮತ್ತು ಕಲೆ ಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ವಿಷಯವನ್ನು ತಲುಪಿಸುವಲ್ಲಿ ಶಿಕ್ಷಕರಲ್ಲಿ ಧ್ವನಿ, ರಾಗ, ತಾಳ, ಲಯಬದ್ಧತೆ, ಪ್ರಾಸ ಇತ್ಯಾದಿ ರಂಗಭೂಮಿಯ ಮಜಲುಗಳು ಗೊತ್ತಿದ್ದಾಗ ಮಾತ್ರ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಪಠ್ಯವನ್ನು ಮುಟ್ಟಿಸಬಲ್ಲರು ಎಂದರು.