ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ವ್ಯಸ್ತ’ ಕಾದಂಬರಿ ಬಿಡುಗಡೆ ಕಾರ್ಯಕ್ರಮ ಡಿ.8ರಂದು

Published 6 ಡಿಸೆಂಬರ್ 2023, 13:53 IST
Last Updated 6 ಡಿಸೆಂಬರ್ 2023, 13:53 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ಅಂಬಾಪುರದ ಅಂತರಂಗ ಪ್ರಕಾಶನ ಹಾಗೂ ಡಿಜಿಟಲ್ ಮೀಡಿಯಾ ಪ್ರೆಸ್ ಕ್ಲಬ್ ವತಿಯಿಂದ ಡಿಸೆಂಬರ್ 8ರಂದು ಸಂಜೆ 4 ಕ್ಕೆ ಶಂಕರ ಮಠದ ಸಭಾಂಗಣದಲ್ಲಿ ಲೇಖಕ ಅ.ರಾ.ಶ್ರೀನಿವಾಸ್ ಅವರ ‘ವ್ಯಸ್ತ’ ಕಾದಂಬರಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. 

ವಕೀಲ ಎಂ.ಎಸ್.ಗೌಡರ್ ಕಾದಂಬರಿಯನ್ನು ಬಿಡುಗಡೆ ಮಾಡಲಿದ್ದು, ಪತ್ರಕರ್ತ ಎಚ್. ಬಿ.ರಾಘವೇಂದ್ರ ಕಾದಂಬರಿ ಕುರಿತು ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಲೇಖಕ ಜಯಪ್ರಕಾಶ್ ಮಾವಿನಕುಳಿ, ಅ.ರಾ.ಶ್ರೀನಿವಾಸ್ ಹಾಜರಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT