ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದ ಎಚ್.ಪಿ. ಗ್ಯಾಸ್ ಕಚೇರಿ ಬಳಿ ಮಂಗಳವಾರ ರಾತ್ರಿ ಗಾಳಿ, ಮಳೆಗೆ ಬೃಹತ್ ಗಾತ್ರದ ಆಲದ ಮರ ರಸ್ತೆಗೆ ಉರುಳಿದ ಪರಿಣಾಮ ಬುಕ್ಕಾಪಟ್ಟಣ- ಹಾಗಲವಾಡಿ ಮಾರ್ಗದ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿತ್ತು.
ಬುಕ್ಕಾಪಟ್ಟಣ- ಹಾಗಲವಾಡಿ ರಸ್ತೆಯಲ್ಲಿ ಬುಡ ಸಮೇತ ಮರ ಉರುಳಿ ಬಿದ್ದ ಕಾರಣ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎಲ್ಲ ವಾಹನಗಳನ್ನು ಪಕ್ಕದ ಕ್ಯಾತೆದೇವರಹಟ್ಟಿ ಗ್ರಾಮದ ಮೂಲಕ ಕಳುಹಿಸಲಾಯಿತು.
ಸ್ಥಳಕ್ಕೆ ಬಂದ ಬುಕ್ಕಾಪಟ್ಟಣ ಪೊಲೀಸ್ ಉಪ ಠಾಣೆ ಅಧಿಕಾರಿ ನಾಗರಾಜು, ಪ್ರಹ್ಲಾದ್, ಅರಣ್ಯ ಇಲಾಖೆ ಸಿಬ್ಬಂದಿ ಕಿರಣ್ ಕುಮಾರ್ ಅವರು ತಕ್ಷಣ ಕಾರ್ಯಚರಣೆ ನಡೆಸಿ ರಾತ್ರಿಯೇ ಜೆಸಿಬಿಯಿಂದ ಮರವನ್ನು ಪಕ್ಕಕ್ಕೆ ಸರಿಸಿ ರಂಬೆಗಳನ್ನು ತುಂಡರಿಸಿ ಸಂಚಾರಕ್ಕೆ ಅಣಿಗೊಳಿಸಿದರು.