ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಅಪಘಾತ: ಬೈಕ್‌ ಸವಾರ ಸಾವು

Published 29 ಏಪ್ರಿಲ್ 2024, 14:11 IST
Last Updated 29 ಏಪ್ರಿಲ್ 2024, 14:11 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಮೈದಾಳ ಬಳಿ ಭಾನುವಾರ ರಾತ್ರಿ ಟಿವಿಎಸ್‌ ಎಕ್ಸ್‌ಎಲ್‌ ಮತ್ತು ಆಟೊ ಮಧ್ಯೆ ನಡೆದ ಅಪಘಾತದಲ್ಲಿ ಟಿವಿಎಸ್‌ ಎಕ್ಸ್‌ಎಲ್‌ ಸವಾರ ಅಂಬರೇಶ್‌ (55) ಮೃತಪಟ್ಟಿದ್ದಾರೆ.

ಯಾದಗಿರಿ ಜಿಲ್ಲೆಯ ಅಂಬರೇಶ್‌ ತಾಲ್ಲೂಕಿನ ಬಂಡಿಹಳ್ಳಿಯಲ್ಲಿ ವಾಸವಿದ್ದರು. ಗಾರೆ ಕೆಲಸ ಮಾಡಿಕೊಂಡಿದ್ದರು. ಹಲವು ದಿನಗಳಿಂದ ಇಲ್ಲವೇ ನೆಲೆಸಿದ್ದರು. ತಡರಾತ್ರಿ ನಗರದಿಂದ ಬಂಡಿಹಳ್ಳಿಗೆ ಹೋಗುವಾಗ ಊರ್ಡಿಗೆರೆಯಿಂದ ಮಾವಿನಕಾಯಿ ತುಂಬಿಸಿಕೊಂಡು ಬರುತ್ತಿದ್ದ ಆಟೊ ಮುಖಾಮುಖಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಆಟೊ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT