<p><strong>ತುಮಕೂರು</strong>: ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಚಿಂತನೆ, ಸಹಯೋಗ ಮತ್ತು ಜವಾಬ್ದಾರಿಯುತ ಮುನ್ನಡೆಸುವಿಕೆ ಮಹತ್ವ ಪಡೆದಿದೆ ಎಂದು ಫ್ಲೋರಿಡಾ ಇಂಟರ್ ನ್ಯಾಷನಲ್ ಯೂನಿವರ್ಸಿಟಿಯ ಪ್ರೊ.ಎಸ್.ಎಸ್.ಅಯ್ಯಂಗಾರ್ ಹೇಳಿದರು.</p>.<p>ನಗರದ ಎಸ್ಐಟಿ ಕಾಲೇಜಿನಲ್ಲಿ ಶುಕ್ರವಾರ ಕಂಪ್ಯೂಟರ್ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗ, ಎಐಸಿಇಟಿ ಸಹಯೋಗದಲ್ಲಿ ಆಯೋಜಿಸಿದ್ದ ಮಾಹಿತಿ ತಂತ್ರಜ್ಞಾನದ ಕುರಿತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.</p>.<p>ಹೊಸ ತಂತ್ರಜ್ಞಾನ ಸುರಕ್ಷತೆಗೆ ಆದ್ಯತೆ ನೀಡಬೇಕು. ಆಗ ಮಾತ್ರ ಹೆಚ್ಚು ದಿನ ಜನರ ಮಧ್ಯೆ ಉಳಿಯುತ್ತದೆ. ಈ ಸಮ್ಮೇಳನ ಮಾಹಿತಿ ತಂತ್ರಜ್ಞಾನದ ಭವಿಷ್ಯಕ್ಕೆ ಬೆಳಕು ನೀಡುತ್ತದೆ. ಆಲೋಚನೆಗಳು ಮುಕ್ತವಾಗಿ ಹರಿಯುವ, ಸಹಯೋಗ ಹುಟ್ಟುವ ಮತ್ತು ದೀರ್ಘಕಾಲದ ಪಾಲುದಾರಿಕೆ ರೂಪಿಸುವ ವೇದಿಕೆಯಾಗಲಿ. ಮುಂದಿನ ದಶಕವನ್ನು ನವೋದ್ಯಮ, ನೀತಿ, ಚೌಕಟ್ಟು ಮತ್ತು ತಂತ್ರಜ್ಞಾನ ರೂಪಿಸುವಂತಾಗಲಿ ಎಂದು ಆಶಿಸಿದರು.</p>.<p>ಐಐಟಿ ಧಾರವಾಡದ ನಿರ್ದೇಶಕ ಮಹದೇವ ಪ್ರಸನ್ನ, ಐಇಇಇ ಚಾಪ್ಟರ್ನ ಆಸೀಫ್ ಅಲಿ ಅಹ್ಮದ್, ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಎಸ್ಐಟಿ ಪ್ರಾಂಶುಪಾಲ ಪ್ರೊ.ಎಸ್.ವಿ.ದಿನೇಶ್, ಪ್ರಾಧ್ಯಾಪಕರಾದ ಎನ್.ಆರ್.ಸುನೀತಾ, ಆರ್.ಅಪರ್ಣಾ, ಟಿ.ಸಿ.ಪ್ರಮೋದ್, ಸುಮಲತಾ ಆರಾಧ್ಯ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಚಿಂತನೆ, ಸಹಯೋಗ ಮತ್ತು ಜವಾಬ್ದಾರಿಯುತ ಮುನ್ನಡೆಸುವಿಕೆ ಮಹತ್ವ ಪಡೆದಿದೆ ಎಂದು ಫ್ಲೋರಿಡಾ ಇಂಟರ್ ನ್ಯಾಷನಲ್ ಯೂನಿವರ್ಸಿಟಿಯ ಪ್ರೊ.ಎಸ್.ಎಸ್.ಅಯ್ಯಂಗಾರ್ ಹೇಳಿದರು.</p>.<p>ನಗರದ ಎಸ್ಐಟಿ ಕಾಲೇಜಿನಲ್ಲಿ ಶುಕ್ರವಾರ ಕಂಪ್ಯೂಟರ್ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗ, ಎಐಸಿಇಟಿ ಸಹಯೋಗದಲ್ಲಿ ಆಯೋಜಿಸಿದ್ದ ಮಾಹಿತಿ ತಂತ್ರಜ್ಞಾನದ ಕುರಿತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.</p>.<p>ಹೊಸ ತಂತ್ರಜ್ಞಾನ ಸುರಕ್ಷತೆಗೆ ಆದ್ಯತೆ ನೀಡಬೇಕು. ಆಗ ಮಾತ್ರ ಹೆಚ್ಚು ದಿನ ಜನರ ಮಧ್ಯೆ ಉಳಿಯುತ್ತದೆ. ಈ ಸಮ್ಮೇಳನ ಮಾಹಿತಿ ತಂತ್ರಜ್ಞಾನದ ಭವಿಷ್ಯಕ್ಕೆ ಬೆಳಕು ನೀಡುತ್ತದೆ. ಆಲೋಚನೆಗಳು ಮುಕ್ತವಾಗಿ ಹರಿಯುವ, ಸಹಯೋಗ ಹುಟ್ಟುವ ಮತ್ತು ದೀರ್ಘಕಾಲದ ಪಾಲುದಾರಿಕೆ ರೂಪಿಸುವ ವೇದಿಕೆಯಾಗಲಿ. ಮುಂದಿನ ದಶಕವನ್ನು ನವೋದ್ಯಮ, ನೀತಿ, ಚೌಕಟ್ಟು ಮತ್ತು ತಂತ್ರಜ್ಞಾನ ರೂಪಿಸುವಂತಾಗಲಿ ಎಂದು ಆಶಿಸಿದರು.</p>.<p>ಐಐಟಿ ಧಾರವಾಡದ ನಿರ್ದೇಶಕ ಮಹದೇವ ಪ್ರಸನ್ನ, ಐಇಇಇ ಚಾಪ್ಟರ್ನ ಆಸೀಫ್ ಅಲಿ ಅಹ್ಮದ್, ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಎಸ್ಐಟಿ ಪ್ರಾಂಶುಪಾಲ ಪ್ರೊ.ಎಸ್.ವಿ.ದಿನೇಶ್, ಪ್ರಾಧ್ಯಾಪಕರಾದ ಎನ್.ಆರ್.ಸುನೀತಾ, ಆರ್.ಅಪರ್ಣಾ, ಟಿ.ಸಿ.ಪ್ರಮೋದ್, ಸುಮಲತಾ ಆರಾಧ್ಯ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>