ಒಂದು ತಂಡ ಮುಂಬೈ, ಇನ್ನೊಂದು ತಂಡ ಆರೋಪಿ ಊರು ಗದಗದಲ್ಲಿ ಮತ್ತೊಂದು ತಂಡ ಬೆಂಗಳೂರು ಮತ್ತು ತುಮಕೂರಿನ ವಿವಿಧ ಕಡೆಗಳಲ್ಲಿ ಆರೋಪಿಯ ಪತ್ತೆಗೆ ಹುಡುಕಾಟ ನಡೆಸಿತ್ತು. ಸೈಯದ್ ಮುಂಬೈಗೆ ಹೋಗಲು ಶನಿವಾರ ರಾತ್ರಿ ಬೆಂಗಳೂರು–ಮುಂಬೈ ರೈಲು ಹತ್ತಿದ್ದರು. ಆರೋಪಿ ಈ ಹಿಂದೆ ಹಲವು ಕಳ್ಳತನದ ಪ್ರಕರಣದಲ್ಲಿ ಭಾಗಿಯಾಗಿ, ಜೈಲು ಶಿಕ್ಷೆ ಅನುಭವಿಸಿದ್ದರು. ಆರೋಪಿಯ ಜಾಡು ಹಿಡಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ನಗರದ ರೈಲು ನಿಲ್ದಾಣದಲ್ಲಿ ಬೆಂಗಳೂರು–ಮುಂಬೈ ರೈಲಿನಲ್ಲಿ ಪರಿಶೀಲನೆ ನಡೆಸಿದಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ.