ನಗರದ ಗೋಕುಲ ಬಡಾವಣೆಯ ಬಿಎಸ್ಎನ್ಎಲ್ ನಿವೃತ್ತ ನೌಕರ ನಾರಾಯಣಪ್ಪ ನಿವೃತ್ತಿ ನಂತರ ಬಂದ ಹಣವನ್ನು ಬ್ಯಾಂಕ್ನಲ್ಲಿ ತಮ್ಮ ಮಗನ ಹೆಸರಿನಲ್ಲಿ ಠೇವಣಿ ಇಟ್ಟಿದ್ದರು. ಠೇವಣಿ ಮೇಲೆ ಬಡ್ಡಿ ದರ ಹೆಚ್ಚಾಗಿದ್ದು, ಬಾಂಡ್ನಲ್ಲಿ ನಮೂದಿಸುವುದಾಗಿ ಹೇಳಿ ಬ್ಯಾಂಕ್ ವ್ಯವಸ್ಥಾಪಕ ನಾಗಾರ್ಜುನ್ ನನ್ನಿಂದ ಬಾಂಡ್ ಪಡೆದುಕೊಂಡು ವಾಪಸ್ ನೀಡಿರಲಿಲ್ಲ. ಆದರೆ ಠೇವಣಿ ಹಣದ ಮೇಲೆ ₹4.50 ಲಕ್ಷ ಸಾಲ ಪಡೆದುಕೊಂಡಿರುವಂತೆ ದಾಖಲೆ ಸೃಷ್ಟಿಸಲಾಗಿದೆ. ಸಾಲ ಪಡೆಯದೇ ಇದ್ದರೂ ಸಾಲ, ಬಡ್ಡಿ ಸೇರಿ ₹4.85 ಲಕ್ಷ ಪಾವತಿಸುವಂತೆ ನೋಟಿಸ್ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.