ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವುದಕ್ಕೆ ಅಡ್ಡಿ ಉಂಟುಮಾಡಿದ ಸರ್ಕಾರದ ನಡೆಯನ್ನು ವಿರೋಧಿಸಿ ಮಂಗಳವಾರ ಅವರು ಇಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಮಾಡಿ, ಮನವಿ ಸಲ್ಲಿಸಿದರೂ, ಕೇವಲ ಒಂದೆರಡು ಮಾತನ್ನಷ್ಟೇ ಆಡಿ ಹೊರಟು ಹೋದರು. ‘ಪೊಲೀಸ್ ಬಲ ಬಳಸಿ ಪಾದಯಾತ್ರೆಗೆ ತಡೆ ಒಡ್ಡಿದ್ದಾರೆ. ನಮ್ಮ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿಲ್ಲ, ಹೀಗಾಗಿ ಹೊರಾಟ ಮುಂದುವರಿಸಲಿದ್ದೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.